« Home | ಸ್ತ್ರಿ ಸಬಲೀಕರಣ » | ಸೆರೆ-ಸುರೆ » | ನಾನಾಗಬೇಕೊಮ್ಮೆ ಮಂತ್ರಿ... » | ಕಾರಣ..!?! » | ರಹಸ್ಯ... » | ಕೊಡುಗೆ... » | ಗೆದ್ದು ಸೋತವನು.. » | ಭ್ರಮೆಯ ನೆಚ್ಚಿ... » | ಅಂತರ್ಮುಖಿಯಾಗು... » | ಗೋವ.. »

ಅಂತ್ಯರಂಗ


ಯಾತಕೆ ಹೀಗೆ ಯಾತನೆಯಾಗಿ

ಕಾಡುವೆ ಹೇಳು ನನ್ನನ್ನು

ಗೋರಿಯ ಭೂತವ ಕೆದಕುವೆಯೇಕೆ

ನೆನಪಿಸಿ ನೆನಪಿಸಿ ನಿನ್ನೆಯನು...

ಶೂನ್ಯದ ಕಡೆಗೆ ನೆಟ್ಟರೂ ದೃಷ್ಟಿ

ತಟ್ಟನೆ ಹೊಳೆವೆ ಮಿಂಚಂತೆ

ತಣ್ಣೀರಿನ ಕೊಳದಿ ಮುಳುಗಿದರೂನು

ಸುಡುವೆ ಒಡಲನು ಚಿತೆಯಂತೆ...

ಮಿಂಚಿದರೇನು ಬಾನಿನ ತುಂಬಾ

ಬೆಳಕಿನ ಸಾವಿರ ಚುಕ್ಕೆಗಳು

ತಿಂಗಳ ಚಂದ್ರ ಕಾಣಿಸದಿರಲು

ಬಾಳನು ತುಂಬಿದೆ ಕಾರಿರುಳು...

ಅಂಕೆಗೆ ನಿಲುಕದು, ಎನನೂ ಬಯಸದು

ಬಾಳಲಿ ತುಂಬಿದೆ ಬರಿ ನೋವು

ಬಂಧನ ಬಿಡಿಸಲು,ಬಿಡುಗಡೆ ತೋರಲು

ಬರಲಿ ಇಂದೇ ಆ ಸಾವು..

ನನಗೆಂದೇ ಇರಲಿ ಆ ಸಾವು...